ಶ್ರೀಮಠದ ಆಶ್ರಯದಲ್ಲಿ ಆಸ್ಪತ್ರೆ ನಿರ್ಮಾಣ, ಗೋಶಾಲೆ, ಶೈಕ್ಷಣಿಕ ಸಂಸ್ಥೆಗಳು ಹಾಗೂ ಉದ್ಯೋಗ ಕೇಂದ್ರಗಳು ಸಮಾಜದ ಸಮಗ್ರ ಅಭ್ಯುದಯಕ್ಕೆ ರೂಪುಗೊಳ್ಳುತ್ತಿವೆ.
ಧರ್ಮಾಧಾರಿತ ಸೇವೆಯ ಮೂಲಕ ಭವಿಷ್ಯದ ಪೀಳಿಗೆಯ ಶ್ರೇಯಸ್ಸಿಗೆ ದೃಢ ಸಂಕಲ್ಪ.
ಶ್ರೀ ಚನ್ನರಾಜ ದೇಶಿಕೇಂದ್ರ ಶ್ರೀ ಷಡ್ಬ್ರಹ್ಮ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಪೀಠಾಧಿಪತ್ಯ ಸ್ವೀಕರಿಸಿ 50 ವರ್ಷ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ “ಸುವರ್ಣ ಸಂಭ್ರಮ” ಕಾರ್ಯಕ್ರಮ ಆಯೋಜಿಸಲಾಗಿದೆ.